ನನ್ನ ಪ್ರೀತಿಯ ಗೆಳೆಯರೆ,
ಬಹಳ ಕಾಲದಿಂದ ನನ್ನ ಮನದಲ್ಲಿ ನಾನ್ಯಾಕೆ ಬ್ಲಾಗ್ ಮಾಡಬಾರದೆಂಬ ಆಲೋಚನೆ ಸುಳಿದಾಡುತಿತ್ತು. ಆದರೆ, ಅದೇ ಮನ ನನ್ನನ್ನು ಹೆದರಿಸುತ್ತಿತ್ತು, ಯಾಕಪ್ಪ ಬೇಕು ನಿನಗೆ ಈ ಬರೆಯುವ ಹುಚ್ಚು? ಬ್ಲಾಗಂತೆ ಬ್ಲಾಗು!!! ತಲೆ ಕೆಟ್ಟೈತ? “ಮಂಡೆ ಸಮ ಉಂಡ ಮಾರಾಯಾ?” ಎಂದು ಕೇಳುತ್ತಿದೆಯೇನೋ ಎಂದನಿಸುತ್ತಿತ್ತು. ಇಂದು ಯಾಕೋ ಧೈರ್ಯ ಮಾಡಿ ಹಿರಿಯ ಗೆಳೆಯ ಆಸುಹೆಗ್ಡೆ ಯವರ ಸಲಹೆಯ ಮೇರೆಗೆ ವರ್ಡ್ ಪ್ರೆಸ್ಸ್ ನಲ್ಲಿ “ನನಗನಿಸಿದ್ದು” ಅನ್ನು ಪ್ರಾರಂಭಿಸಿರುವೆ.
ನಿಮ್ಮೆಲ್ಲರ ಸಹಕಾರದೊಂದಿಗೆ ಮುಂದುವರಿಯಬಲ್ಲೆನೆಂಬ ವಿಶ್ವಾಸವನ್ನು ಹೊಂದಿ ಮುಂದಡಿಯಿಡುತ್ತಿದ್ದೇನೆ.
ಹರಸಿ, ಹಾರೈಸಿ, ತಿದ್ದಿ, ತೀಡಿ, ಬೆಳೆಸಿ.
ಇಂತೀ ನಿಮ್ಮ ಪ್ರೀತಿಯ,
ಸಂದೀಪ ಕುಮಾರ ಶೆಟ್ಟಿ
ಸಂದೀಪ,
ಮೊದಲ ಹೆಜ್ಜೆ ಇಡುವಾಗ ಇಂದು ನಾನು ನಿಮ್ಮ ಕಿರುಬೆರಳ ಹಿಡಿದು ನಡೆಸಿದ್ದೇನೆ ನಿಜ
ನೀವಿನ್ನು ನಡೆದು, ಓಡುತ್ತಿರುವುದನ್ನು ಕಂಡಾಗ ನಿಜಕ್ಕೂ ನಾನು ಹೆಮ್ಮೆ ಪಡುವುದು ಸಹಜ.
ಭಾಷೆಯ ಮೇಲೆ ಅಕ್ಕರೆ ಇರಲಿ, ನಮ್ಮ ಹೆತ್ತಬ್ಬೆಯ ಮೇಲಿರುವಂತೆ
ಪದಗಳ ಮೇಲೆ ಹಿಡಿತವಿರಲಿ ಮಕ್ಕಳ ಮೇಲೆ ಮಾತಾಪಿತರಿಗಿರುವಂತೆ
ಹಾಸ್ಯ ಇರಲಿ, ಆದರೆಂದೂ ಮನ ನೋಯಿಸುವ ವ್ಯಂಗ್ಯ ಇಲ್ಲದಿರಲಿ
ಲಾಸ್ಯ ಇರಲಿ, ಆದರೆಂದೂ ಮುಜುಗರ ತರುವ ಅವಾಚ್ಯ ಶಬ್ದಗಳಿಲ್ಲದಿರಲಿ.
ನಿಮಗನಿಸಿದ್ದನ್ನು ಬರೆಯುತ್ತಿರಿ ನಿಮ್ಮ ಮನ ಬಯಸಿದಾಗಲೆಲ್ಲಾ
ಪ್ರತಿಕ್ರಿಯೆಗಳ ಸಮಚಿತ್ತದಿಂದ ಸ್ವೀಕರಿಸಿ ಉತ್ತರಿಸಿ ಅವಶ್ಯ ಇದ್ದಾಗಲೆಲ್ಲಾ.
ಶುಭ ಹಾರೈಕೆಗಳೊಂದಿಗೆ.
-ಆತ್ರಾಡಿ ಸುರೇಶ್ ಹೆಗ್ಡೆ.
ಪ್ರೀತಿಯ ಹಾರೈಕೆಗೆ ಋಣಿ.
creating best web site sister
ಮಲ್ಪುಲೆ ಮಲ್ಪುಲೆ ನಮ ಇರೆನ ಒಟ್ಟುಗು ಉಲ್ಲಾ. ದಾಲ ಪೋಡುನು ಬೊಡ್ಚಿ………………